ಏರುವದೇತಕೆ

ಧರೆಯಲಿದ್ದು ಆಗಸವನ್ನು ನೋಡಿ,
ಹೊರೆಟನು ಗಗನ ಚುಂಬಿಸಲು.
ಬಿದ್ದೆ ಎದ್ದೆ ತಡಕಾಡಿದೆ ಹುಡುಕಾಡಿದೆ
ಕೊನೆಗೂ ಮುಟ್ಟಿದೆ ಆ ಗಗನವ.
ಇನ್ನೇನು ಚುಂಬಿಸಬೇಕು ಅಷ್ಟರಲಿ,
ಕ್ಷಣ ತಡೆದು ನೋಡಿದೆನು,
ವಸುಂಧರೆಯನು!!!
ಛೇ ಏನು ಮಾಡಿದೆ ನಾನು,
ಇ ಸುಂದರ ಸೃಷ್ಟಿಯನು ಬಿಟ್ಟು,
ಮೇಲೇಕೆ ಏರಿದೆ ಧರೆಯನು ಮರೆತು.
ಚುಂಬಿಸಲೋಲ್ಲೆ ಆ ಗಗನವ.
ಕಂಬನಿಯೊಂದಿಗೆ ಇಳಿದೆ,
ಇಳೆಯ ಕಡೆಗೆ!
ಮಹಾತ್ಮನಾದರೆ ಸಿಗುವದೆನು?
ಮಾನವನಾದರೆ ಸಿಗುವದಿಲ್ಲವೇನು

No comments: